ಮೈಸೂರು: ವಿದ್ಯಾರ್ಥಿಗಳು ಓದುವ ಸಮಯದಲ್ಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್. ಬಸವರಾಜು ಸಲಹೆ ನೀಡಿದರು.City & Local Guidesನಗರದ ಹೆಬ್ಬಾಳದಲ್ಲಿ ಇರುವ ಅವಿರತ ಮೈಸೂರು ಸೆಂಟ್ರಲ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಿಸ್ತುಬದ್ಧ ಜೀವನವೇ ನಾಯಕತ್ವದ ಮೊದಲ ಮೆಟ್ಟಿಲು. ವಿದ್ಯಾರ್ಥಿ ದೆಸೆಯಲ್ಲಿ ಕಲಿಯುವ ಆಡಳಿತಾತ್ಮಕ ಮತ್ತು ನಾಯಕತ್ವದ ಅಂಶಗಳು ಭವಿಷ್ಯದಲ್ಲಿ ನಿಮ್ಮನ್ನು ಒಬ್ಬ ಯಶಸ್ವಿ ಮತ್ತು ಜವಾಬ್ದಾರಿಯುತ ನಾಗರಿಕನನ್ನಾಗಿ ರೂಪಿಸುತ್ತದೆ.: ವ್ಯಾಸಂಗ ಮುಗಿದೊಡನೆ ಹತ್ತಿಪ್ಪತ್ತು ಸಾವಿರಕ್ಕೆ ಕೆಲಸ ಮಾಡುವ ಕೆಲಸಗಾರರಾಗಬೇಡಿ. ಬದಲಿಗೆ ನೀವೆ ಉದ್ಯಮ ಪ್ರಾರಂಭ ಮಾಡಿ ಸಾವಿರಾರು ಜನರಿಗೆ ಕೆಲಸ ಕೊಡವ ಮಾಲೀಕರಾಗಿ. ಅದಕ್ಕೆ ಬೇಕಾಗದ ಅಗತ್ಯ ಸಿದ್ಧತೆಗಳನ್ನು ಈ ಹಂತದಲ್ಲೇ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.[ ವಿದ್ಯಾರ್ಥಿಗಳು ದೊಡ್ಡ, ದೊಡ್ಡ ಕನಸುಗಳನ್ನು ಕಾಣಬೇಕು. ಅವುಗಳನ್ನು ನನಸಾಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಲಿ. ಇಂದು ಆ ಕನಸುಗಳು ಬರಿ ಶೂನ್ಯವಾಗಿ ಕಾಣಬಹುದು. ಈ ಹಂತದಲ್ಲಿ ಒಂದೊAದೆ ಕನಸುಗಳ ಮೂಲಕ ಒಂದೊಂದೇಶೂನ್ಯವನ್ನು ಪೋಣಿಸುತ್ತ ಹೋಗಿ ಕೊನೆಗೆ ಅದಕ್ಕೆ ತಂತಾನೇ ಸಂಖ್ಯೆಗಳು ಜೋಡಿಸಿಕೊಳ್ಳುತ್ತ ಹೋಗುತ್ತವೆ. ವಿದ್ಯಾರ್ಥಿಗಳು ಸೋಲುಗಳಿಗೆ ಕುಗ್ಗದೆ, ತಪ್ಪುಗಳಿಂದ ಪಾಠ ಕಲಿಯಬೇಕು. ಸಾಧಿಸಲು ಛಲಬೆಳಸಿಕೊಳ್ಳಬೇಕು ಆಗಿದ್ದರಷ್ಟೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.