Wednesday, July 1, 2026
HomeUncategorizedಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ...

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಗಾoಧಿಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ Chief Minister of Karnataka DK Shivakumar ಅವರು ಮಾತನಾಡಿದರು.ತೆಲoಗಾಣದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ವಾರ್ತಾಭಾರತಿ ಪ್ರಧಾನ ಸoಪಾದಕ ಅಬ್ಬುಸಲಾಮ್ ಪುತ್ತಿಗೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸoಘದ ಅಧ್ಯಕ್ಷ ಶಿವಾನoದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನo, ವಾರ್ತಾ ಇಲಾಖೆ ಆಯುಕ್ತ ಎo.ಎನ್. ಅನುಚೇತ್, ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಉಪಸ್ಥಿತರಿದ್ದರು.

Previous article
*ನೇಸರ ನೋಡು’ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು **ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ಮೈಸೂರು ಘಟಕದ ಪರಿಸರ ಮಾಸಾಚರಣೆ ಸಮಿತಿ, ‘ಸ್ಪೂರ್ತಿ’ ಬಿ.ಎ.ಬಿ. ಮಹಿಳಾ ಘಟಕ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಂಟಿ ಸಹಯೋಗದಲ್ಲಿ ಜೂನ್ 17, 2026 ರಂದು ಹಮ್ಮಿಕೊಂಡಿದ್ದ ವಿಶ್ವ ಪರಿಸರ ಮಾಸದ ವಿಶೇಷ ಕಾರ್ಯಕ್ರಮ “ನೇಸರ ನೋಡು” (ಕವಿ ಚಿತ್ರಗೀತೆಗಳು) ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಮೈಸೂರಿನ ಅಕ್ಕಮಹಾದೇವಿ ರಸ್ತೆಯಲ್ಲಿರುವ ಬಿ.ಎ.ಐ ನ ಎಂ.ಬಿ.ಸಿ.ಟಿ. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಈ ಸುಂದರ ಸಂಜೆ, ಪರಿಸರ ಜಾಗೃತಿಯ ಸಂದೇಶದೊಂದಿಗೆ ನೆರೆದಿದ್ದ 300 ಕ್ಕೂ ಹೆಚ್ಚು ಸಂಗೀತ ಆಸಕ್ತರಿಗೆ ಅತ್ಯದ್ಭುತ ಸಂಗೀತ ರಸದೌತಣವನ್ನು ಉಣಬಡಿಸಿತು. ಇಡೀ ಸಭಾಂಗಣವು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದು, ಕೊನೆಯವರೆಗೂ ಎಲ್ಲರೂ ಮಂತ್ರಮುಗ್ಧರಾಗಿ ಕುಳಿತು ಸಂಗೀತ ಸುಧೆಯಲ್ಲಿ ಮಿಂದೆದ್ದದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು.ಈ ಕಾರ್ಯಕ್ರಮದ ಯಶಸ್ಸಿನ ಪ್ರಮುಖ ರೂವಾರಿಯಾಗಿ, ಇಡೀ ಸಂಜೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿದವರು ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕದ ಅಧ್ಯಕ್ಷರು ಹಾಗೂ BAI ನ ಮಾಜಿ ಅಧ್ಯಕ್ಷರು ಆಗಿರುವ ನಾಗರಾಜ್ ವಿ. ಭೈರಿ ರವರು. ಇವರ ಸಂಗೀತ ಸೇವೆಗಾಗಿ ಇವರನ್ನು ಗೌರವ ಪೂರ್ವಕವಾಗಿ ಬಿ.ಎ.ಐ ವತಿಯಿಂದ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಬಿ.ಎ.ಐ ಮೈಸೂರು ಘಟಕದ ಚೇರ್ಮನ್ ಪ್ರಭಾಕರ್ ರಾವ್ ಕೆ.ಆರ್, ಗೌರವ ಕಾರ್ಯದರ್ಶಿ ಪ್ರವೀಣ್ ಪಾಲ್ ಎಂ.ಡಿ, WEM ಚೇರ್ಮನ್ ಸಿ.ಡಿ. ಕೃಷ್ಣ, ಕಾರ್ಯದರ್ಶಿ ಎಸ್. ವಾಸುದೇವನ್, ‘ಸ್ಪೂರ್ತಿ’ ಸಂಸ್ಥೆಯ ಪ್ರೆಸಿಡೆಂಟ್ ಶ್ರೀಮತಿ ಶಾಂತಿ ಭಾರದ್ವಾಜ್, ಕಾರ್ಯದರ್ಶಿ ಶ್ರೀಮತಿ ವೀಣಾ ಅಶೋಕ್ ಮತ್ತು ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದು ಕಾರಣವಾಯಿತು .ಕಾರ್ಯಕ್ರಮಕ್ಕೆ ಮೆರುಗು ನೀಡಿದ ಪ್ರಸಿದ್ಧ ಗಾಯಕರಾದ ನಿತಿನ್ ರಾಜಾರಾಮ್ ಶಾಸ್ತ್ರಿ, ರಶ್ಮಿ ಚಿಕ್ಕಮಗಳೂರು, ಲಕ್ಷ್ಮಿ ದಿನೇಶ್, ನರಸಿಂಹಮೂರ್ತಿ ಹಾಗೂ ತ್ಯಾಗರಾಜ್ ರವರು ತಮ್ಮ ಸುಮಧುರ ಧ್ವನಿಯ ಮೂಲಕ ಪರಿಸರ ಮತ್ತು ಸಾಹಿತ್ಯದ ಸೊಗಡನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು. ಇವರಿಗೆ ವಾದ್ಯವೃಂದದಲ್ಲಿ ಕೀ ಬೋರ್ಡ್‌ನಲ್ಲಿ ಪುರುಷೋತ್ತಮ್, ರಿದಂ ಪ್ಯಾಡ್‌ನಲ್ಲಿ ಗುರುದತ್, ತಬಲಾದಲ್ಲಿ ರೋಷನ್ ಸೂರ್ಯ ಹಾಗೂ ಕೊಳಲಿನಲ್ಲಿ ಪುನೀತ್ ರವರು ಈ ಕಾರ್ಯಕ್ರಮವನ್ನು ಸವಾಲಾಗಿ ಸ್ವೀಕರಿಸಿ ಅತ್ಯಂತ ಅದ್ಭುತವಾಗಿ ಸಾಥ್ ನೀಡಿದರು. ಎಂದಿನಂತೆ ತಮ್ಮ ಚುರುಕಿನ ಹಾಗೂ ಲೈವ್ಲಿ ನಿರೂಪಣೆಯ ಮೂಲಕ ಇಡೀ ಸಭಾಂಗಣವನ್ನು ಉತ್ಸಾಹದಿಂದ ಇರಿಸಿದ ಎಡೆಯೂರ್ ಸಮೀಉಲ್ಲಾ ರವರ ಕಾರ್ಯ ಶ್ಲಾಘನೀಯ. ಬಂದಿದ್ದ ಎಲ್ಲಾ ಬಿಲ್ಡರ್ ಸ್ನೇಹಿತರು, ಗೃಹಿಣಿಯರು ಹಾಗೂ ಗಣ್ಯರಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದ್ದು, ಇದೊಂದು ‘ಸೂಪರ್ ಡ್ಯೂಪರ್ ಹಿಟ್’ ಮತ್ತು ಸಾರ್ಥಕ ಕಾರ್ಯಕ್ರಮವಾಗಿ ದಾಖಲಾಗಿದೆ.
Next article
ಮೈಸೂರು: ವಿದ್ಯಾರ್ಥಿಗಳು ಓದುವ ಸಮಯದಲ್ಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್. ಬಸವರಾಜು ಸಲಹೆ ನೀಡಿದರು.City & Local Guidesನಗರದ ಹೆಬ್ಬಾಳದಲ್ಲಿ ಇರುವ ಅವಿರತ ಮೈಸೂರು ಸೆಂಟ್ರಲ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಿಸ್ತುಬದ್ಧ ಜೀವನವೇ ನಾಯಕತ್ವದ ಮೊದಲ ಮೆಟ್ಟಿಲು. ವಿದ್ಯಾರ್ಥಿ ದೆಸೆಯಲ್ಲಿ ಕಲಿಯುವ ಆಡಳಿತಾತ್ಮಕ ಮತ್ತು ನಾಯಕತ್ವದ ಅಂಶಗಳು ಭವಿಷ್ಯದಲ್ಲಿ ನಿಮ್ಮನ್ನು ಒಬ್ಬ ಯಶಸ್ವಿ ಮತ್ತು ಜವಾಬ್ದಾರಿಯುತ ನಾಗರಿಕನನ್ನಾಗಿ ರೂಪಿಸುತ್ತದೆ.: ವ್ಯಾಸಂಗ ಮುಗಿದೊಡನೆ ಹತ್ತಿಪ್ಪತ್ತು ಸಾವಿರಕ್ಕೆ ಕೆಲಸ ಮಾಡುವ ಕೆಲಸಗಾರರಾಗಬೇಡಿ. ಬದಲಿಗೆ ನೀವೆ ಉದ್ಯಮ ಪ್ರಾರಂಭ ಮಾಡಿ ಸಾವಿರಾರು ಜನರಿಗೆ ಕೆಲಸ ಕೊಡವ ಮಾಲೀಕರಾಗಿ. ಅದಕ್ಕೆ ಬೇಕಾಗದ ಅಗತ್ಯ ಸಿದ್ಧತೆಗಳನ್ನು ಈ ಹಂತದಲ್ಲೇ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.[ ವಿದ್ಯಾರ್ಥಿಗಳು ದೊಡ್ಡ, ದೊಡ್ಡ ಕನಸುಗಳನ್ನು ಕಾಣಬೇಕು. ಅವುಗಳನ್ನು ನನಸಾಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಲಿ. ಇಂದು ಆ ಕನಸುಗಳು ಬರಿ ಶೂನ್ಯವಾಗಿ ಕಾಣಬಹುದು. ಈ ಹಂತದಲ್ಲಿ ಒಂದೊAದೆ ಕನಸುಗಳ ಮೂಲಕ ಒಂದೊಂದೇಶೂನ್ಯವನ್ನು ಪೋಣಿಸುತ್ತ ಹೋಗಿ ಕೊನೆಗೆ ಅದಕ್ಕೆ ತಂತಾನೇ ಸಂಖ್ಯೆಗಳು ಜೋಡಿಸಿಕೊಳ್ಳುತ್ತ ಹೋಗುತ್ತವೆ. ವಿದ್ಯಾರ್ಥಿಗಳು ಸೋಲುಗಳಿಗೆ ಕುಗ್ಗದೆ, ತಪ್ಪುಗಳಿಂದ ಪಾಠ ಕಲಿಯಬೇಕು. ಸಾಧಿಸಲು ಛಲಬೆಳಸಿಕೊಳ್ಳಬೇಕು ಆಗಿದ್ದರಷ್ಟೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments